ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು
ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ
ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ
ಘನವರಣ ಹನಿರಸದ ಬಲು ಸಿವುರಿನ
ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ
ಕಣಕಣನೆ ದನಿಗೊಡುವ ಗಜ ಗಬ್ಬುಬೇಕೆ

ಕಿರಿ ಪಿರಿಯ ನವನುಡಿಯ ಹೊಳೆ ಹೊನ್ನ ಸರಿಗೆಯಲಿ
ಸರಿದಿಟ್ಟು ತರತರದೈಸಿರಿರಾಗ ವರಸೆಯಲಿ
ಮರಮಠಳಿ ಶೃತಿನೋಡಿ ಹೊಂಗಳಲ ಪ್ರಾಣಗಳ
ಬೆರಳಲ್ಲಿ ನುಡಿಸುತ್ತ ಮನ ಮರೆಸಲೊ

ಹೊಸಪದವ ಹಳೆಪದವ ಹೊಸದಿಟ್ಟು ಹೊಸಪರಿಯ
ಹೊಸಧಾಟಿ ಹೊಸಭಾವ ಪೊಸೆವೊಂದು ಲಾವಣಿಯ
ನಸುನಗುತ ರಸವರಿದು ನೀ ಮೋದ ಪಡುವಂಥ
ಮಿಸುನಿಯಾ ಸ್ಪರ್ಶದಾ ಕೃತಿಯೊಂದು ಬೇಕೋ

ಚಳವಳಿಯ ಭಾವಕಿವೆ ಕಿಡಿ ಇಡುವ ಪದಗಳಿವು
ತಿಳವನ್ಹಿ ಬಿಳಿಜೋತಿಗಿದೆ ಭಕುತ ಮನಧವಿಸು
ಹೊಳೆಯಾಯ್ತು ಗುಪ್ತಾಗ್ನಿ ಉಕ್ಕುತಿದೆ ಜ್ವಾಲೆಯಿದು
ತಿಳಿಹು ಮನದಿಷ್ಟಾರ್ಥ ಪಾಡಲೇನ

ಗುಡ್ಡ ಕಾಡಿನ ರೂಪು ಅಡ್ಡವಿಸಿ ವರಣಿಸಲೊ
ಗುಡ್ಡದಿಂ ಧಡಧಡನೆ ಹಾರ್ವುದರ ಶೃತಿಗೆ?
ಹೆಡ್ಡರೆಲ್ಲರು ಕೂಡಿ ಧೂಳ ರೌರವದಲ್ಲಿ
ಅಡ್ಡಾಡಿ ಮೈಮರವ ಪರಿಯ ಬಣ್ಣಿಸಲೊ?

ನಗರಗಳು ಬೆಳೆದಳಿದು ಹನುಮ ಭೀಮರು ಎದ್ದು
ಜಗವ ತಲ್ಲಣಗೊಳಿಸೆ! ಕಂತಿ ಪಂಪರ ಕವಿತೆ!
ಚಿಗಿದು ಮೊಳಗಲು! ಇಳೆಯು ನಲಿದೊಲಿಯು ತಿರುವಾಗ!
ಜಗದಲ್ಲಿ ಬೆಳದಿಳಿದ ಕಥೆಗಳವು ಬೇಕೆ?

ಆದಿ ಕವಿಯಿಂದೀಚೆ ಪದಶಿಲ್ಪಿಗಳನೆಲ್ಲ
ಸೋದರರ! ಕೊಳಲ ಭಾಂಧವರನ್ನು ಮಾಯೆಯಲಿ
ಓದದರ ಮುಂದೆತ್ತಿ ಸುಳಿದಾಡಿಸುತಲಿನ್ನು
ಹೋದ ವೈಭವವನ್ನು ಕಾಣಿಸಲೊ ಕನಸಲ್ಲಿ?

ಇದ್ದಾಗ ಕರೆ ಎನದೆ ಕೂಡೆನದೆ ಕೊಳ್ಳೆನದೆ
ಹೊಯ್ದೆಸೆದ ಕಲ್ಲಲ್ಲಿ ಹೂತಿಟ್ಟ ಭಕ್ತನನು
ಮುದ್ದಿಟ್ಟು! ಕಡೆಕಡೆಗೆ ಪಾಡುವರು ರಗಳೆಗಳ!
ಸುಯ್ದೆದ್ದು ಮನವದನು ಕೇಳುತಿದೆ ಕೇಳೈ!

ಗೆಳೆಯರಾಗುಂಪಿನದು ಮಧುಯುಗದ! ಮುಧುಗಾನ
ಮೋಳಗುತಿದೆ ಮಹಿಷೂರ ಹೊಂಗಳಲ! ಸವಿಗಾನ
ಬಲು ರವದ ಹೆದ್ದುಂಬೆ! ಹೊಯ್ಸಳನ ಹೆಗ್ಗಾನ
ನಿಲದಿನ್ನು ಪೇಳೈ ಪಾಲಿಸಪ್ಪಣೆಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೦
Next post ನವಿಲುಗರಿ – ೩

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys